ಅನುಕರುಣೆಯೆಂಬ

ಅನುಕರುಣೆಯೆಂಬ
ಬಿಸಿಲಗುದುರೆಯನೇರಿ |
ಸಮಯದಿಂದೆ ಓಡುತಿರುವ
ಅಲ್ಪ ಬುದ್ದಿಮತಿಗಳೇ|
ಜೀವನದ ಮೌಲ್ಯಮರೆತಿರಿ
ಅದನೇ ನಿಮ್ಮ ಮಕ್ಕಳಿಗೂ ಕಲಿಸಿ
ಮುಂದೆಂದು ಕೊರಗದಿರಿ||

ಹೊಟ್ಟೆಹೊರೆವ ವಿದ್ಯೆ ಕಲಿತು
ಜೀವನದ ವಿದ್ಯೆ ಮರೆತು|
ಹಣದ ಹುಚ್ಚು ಹೆಚ್ಚಿ
ಹೆಚ್ಚೆಚ್ಚುಗಳಿಸ ಬಯಸಿ|
ಆನ್ನ ನಿದ್ರಾದಿಗಳ ತ್ಯಜಿಸಿ
ದುಡಿದು ಏನನು ಸಾಧಿಸುವಿರಿ? |
ಸಮಾಧಾನ ವಿರದ
ಜೀವನವನೇಕೆ ನಡೆಸುವಿರಿ|
ಮಾನವೀಯತೆ, ಬಂಧು ಬಳಗವಿಲ್ಲದ
ಸಮಾಜವನೇಕೆ ಸೃಷ್ಟಿಸುವಿರಿ||

ತಿನ್ನುವುದು ಹಿಡಿ ಅನ್ನ
ಉಡುವುದು ಗೇಣು ಬಟ್ಟೆ|
ಬದುಕುವುದು ಕೆಲವೇದಿನ
ಸಾವು ವಾರದಲ್ಲೊಂದು ದಿನ
ಆದರೂ ಅದೇತಕೆ ಅತೃಪ್ತಿ
ಎಲ್ಲಾ ನನಗೇ ಬೇಕೆಂಬ ದುರಾಸೆಬುದ್ಧಿ||

ಎಣ್ಣೆ ಹಚ್ಚಿ ಮಣ್ಣಲಿ ಉರುಳಿದರೆ
ಹೆಚ್ಚೇನು ಲಾಭವಿರದು|
ಬದುಕಿ, ಬದುಕಲು ಬಿಡಿ
ಎಂದಿದೆ ಸುಧರ್ಮ|
ಕಾಲನ ಗೆಲ್ಲುವೆನೆಂದರೆ
ಅದು ನಿನ್ನ ಕರ್ಮ |
ಜೀರ್ಣಿಸುವಷ್ಟು ಉಣಿಸಿ
ದಕ್ಕುವಷ್ಟು ಗಳಿಸಿ
ಮಕ್ಕಳಿಗೆ ಕಷ್ಟಪಟ್ಟು
ದುಡಿದು ಬದುಕುವುದ ಕಲಿಸಿ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಾನವ ಶರೀರ : ವಿಸ್ಮಯಗಳ ಆಗರ
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೧೦೩

ಸಣ್ಣ ಕತೆ

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

cheap jordans|wholesale air max|wholesale jordans|wholesale jewelry|wholesale jerseys